ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 4 ನೇ ವಾರ್ಷಿಕ ಸಭೆ ಮತ್ತು ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಹರೇಕಳ ಫರೀದ್ ನಗರದ ರಫೀಖ್ ಪ್ಯಾಲೇಸಿನಲ್ಲಿ ನಡೆಯಿತು.
ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು.
ಮಜ್ಲಿಸಿನ ಬಳಿಕ ನಡೆದ ವಾರ್ಷಿಕ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರು ಮಾತನಾಡಿ, ಫೆಲೆಸ್ತೀನಿನ ಗಾಝಾದಲ್ಲಿ ಮಕ್ಕಳು ಮಹಿಳೆಯರು ಸಹಿತ ಅಲ್ಲಿನ ನಾಗರಿಕರನ್ನು ಅತ್ಯಂತ ಕ್ರೂರವಾಗಿ ಇಸ್ರೇಲ್ ಕೊಲ್ಲುತ್ತಿರುವುದು ಅತ್ಯಂತ ಖಂಡನೀಯವಾಗಿದ್ದು, ಅದೇ ಸಂದರ್ಭದಲ್ಲಿ ಯಮನಿನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳದ ನಿಮಿಷಾ ಪ್ರಿಯ ಎಂಬ ಸಹೋದರಿಯ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಲು ಮತ್ತು ಬಿಡುಗಡೆಗೊಳಿಸಲು ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾಡುತ್ತಿರುವ ಮಾನವೀಯ ಕಾರುಣ್ಯದ ಚಟುವಟಿಕೆಯನ್ನು ಪ್ರಶಂಶಿಸಿ ಇದು ನಮಗೆ ಮಾದರಿಯಾಗಬೇಕು ಎಂದರು.
ಸಭೆಯಲ್ಲಿ ಶೈಖುನಾ ಉಸ್ತಾದರಿಗೆ ಮತ್ತು ಉಸ್ತಾದರ ಶಿಷ್ಯರಲ್ಲಿ ವೈದ್ಯರಾಗಿ ಸೇವೆ ನೀಡುತ್ತಿರುವ ಡಾ. ನುಅ್'ಮಾನ್ ಮಂಜನಾಡಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಶ್ರಫ್ ಸಖಾಫಿ ಮುರ, ಅಬ್ದುರ್ರಶೀದ್ ಹಿಮಮಿ ಸಖಾಫಿ ಪಚ್ಚಂಬಳ, ಅಬ್ದುರ್ರಹ್ಮಾನ್ ಲತೀಫಿ ಬೆಳ್ಮ, ಸಿ ಎಚ್ ಅಬ್ದುಲ್ ರಹ್ಮಾನ್ ಲತೀಫಿ, ಡಾ. ನುಅ್'ಮಾನ್ ಮಂಜನಾಡಿ, ಇಲ್ಯಾಸ್ ಆಲಡ್ಕ, ಸಿದ್ದೀಖ್ ಇನೋಳಿ, ರಫೀಖ್ ಪಾವೂರು, ಅನೀಸ್ ಮಂಜನಾಡಿ, ಅಬ್ದುಲ್ ಹಮೀದ್ ಕಾಶಿಪಟ್ನ ಮತ್ತು ರಫೀಖ್ ಫರೀದ್ ನಗರ ಇವರ ಸಂಬಂಧಿಗಳು ಪ್ರಸ್ತುತ ಸಭೆಯಲ್ಲಿ ಉಪಸ್ಥಿತರಿದ್ದರು.
Comments
Post a Comment