ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ವಾರ್ಷಿಕ ಮಜ್ಲಿಸ್ ಮತ್ತು ಸಭೆ ಉಪ್ಪಿನಂಗಡಿಯ ಮುರದ ಮಿದ್ಲಾಜ್ ಪ್ಯಾಲೇಸಿನಲ್ಲಿ ನಡೆಯಿತು. ಶೃಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು. ಮಜ್ಲಿಸಿನ ಬಳಿಕ ನಡೆದ ವಿಶೇಷ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು. ಸಭೆಯಲ್ಲಿ ಕೈಗೊಂಡ ತೀರ್ಮಾನಗಳು. 1- ಎಲ್ಲಾ ಹಿಜರಿ ತಿಂಗಳ ಮೂರನೇ ಶುಕ್ರವಾರ ಮಜ್ಲಿಸ್ ನಡೆಸುವುದು. ಒಂದು ತಿಂಗಳು ತಹ್ಲೀಲ್ ಮಜ್ಲಿಸ್, ನಂತರದ ತಿಂಗಳು ನಾರಿಯತು ಸ್ವಲಾತ್ ಮಜ್ಲಿಸ್ ನಡೆಸುವುದು. 2- ವರ್ಷದ ಪ್ರಥಮ ತಿಂಗಳಾದ ಮುಹರ್ರಮಿನಲ್ಲಿ ವಾರ್ಷಿಕ ನಡೆಸುವುದು. 3- ಮಜ್ಲಿಸು ಖಿದ್ಮತಿಲ್ ಇಸ್ಲಾಂ ಸಂಘಟನೆಯ ಸದಸ್ಯರ ಹತ್ತಿರದ ಕುಟುಂಬಸ್ಥರಲ್ಲಿ ಯಾರಾದರೂ ಮರಣಹೊಂದಿದರೆ ಕುರಾನ್ ಖತ್ಮ್ ಹದ್ಯಾ ಮಾಡುವುದು. 4- ಮಜ್ಲಿಸಿನ ಪ್ರಗತಿಗೋಸ್ಕರ ಕನಿಷ್ಠ 100 ರೂಪಾಯಿಗಳು ಸದಸ್ಯತನ ಶುಲ್ಕವಾಗಿ ನೀಡುವುದು. 5- ಎಲ್ಲಾ ತಿಂಗಳ ಮೂರನೇ ಶುಕ್ರವಾರ ಮಜ್ಲಿಸ್ ನಡೆಸುವುದು. ಮಜ್ಲಿಸು ಖಿದ್ಮತಿಲ್ ಇಸ್ಲಾಂ ಈ ತನಕ ನಡೆಸಿದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಉಸ್ತಾದರು ಮಜ್ಲಿಸಿನ ಸದಸ್ಯರು, ಕುಟುಂಬಸ್...
ಅಸ್ಸಲಾಮು ಅಲೈಕುಂ. ನಮ್ಮ ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಎಂಬ ಸಂಘಟನೆಯ ಬ್ಲಾಗ್ ಆಗಿದ್ದು, ಗೌರವಾನ್ವಿತ ಉಸ್ತಾದರ ಮತ್ತು ಶಿಷ್ಯಂದಿರ ಸಂಘಟನೆಯ ಅಧೀನದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಈ ಬ್ಲಾಗಿನಲ್ಲಿ ಲಭಿಸಲಿದೆ. . ಉಸ್ತಾದರ ನಿರ್ದೇಶನದಲ್ಲಿ ಬ್ಲಾಗ್ ಮುಂದುವರಿಯಲಿದೆ. ಇಂಶಾ ಅಲ್ಲಾಹ್.